ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್ ‘ಮುಸ್ಲಿಂ ಯುವಕರ ಪ್ರೇಮದಲ್ಲಿ ಬೀಳುವ ಮೊದಲು ಹಿಂದೂ ಯುವತಿಯರು ಸಾಕಷ್ಟು ಯೋಚಿಸಬೇಕು. ಈಗ ಅಪೂರ್ವಗೆ ಆದ ಪರಿಸ್ಥಿತಿ ನೆನಪಿಸಿಕೊಳ್ಳಬೇಕು. ಆರೋಪಿಯನ್ನು ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದು ಶ್ಲಾಘನೀಯ. ಆರೋಪಿ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು. ಚಿಲ್ಲರೆ ಪ್ರಕರಣ ದಾಖಲಿಸಿದರೆ ಜೈಲಿನಿಂದ ಹೊರಬಂದ ಮೇಲೆ ನಾವೇ ಕೊಚ್ಚಿ ಹಾಕುತ್ತೇವೆ’ ಎಂದರು.