ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅನುದಾನದಲ್ಲಿ ತ್ವರಿತ ಸಾರಿಗೆ ಸೇವೆ (ಬಿಆರ್ಟಿಎಸ್) ವತಿಯಿಂದ ಹಳೇ ಬಸ್ ನಿಲ್ದಾಣ ಅಭಿವೃದ್ಧಿ, ವಾಣಿ ವಿಲಾಸ ವೃತ್ತ ವಿಸ್ತರಣೆ, ಬಿಆರ್ಟಿಎಸ್ ಸಂಚಾರ ಸೇವೆ ವಿಸ್ತರಣೆ ಅಂಗವಾಗಿ ಹೊಸೂರಿನಿಂದ ಗೋಕುಲವರೆಗೆ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು.