ಮಂಜಪ್ಪ ಅವರ ಮೃತದೇಹವನ್ನು ಗ್ರಾಮಕ್ಕೆ ತರುತ್ತಿದ್ದಂತೆಯೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಸಾವಿಗೆ ನಿಖರ ಕಾರಣ ಗೊತ್ತಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಶವ ತಂದಿದ್ದ ಯೋಧರು, ‘ಶವವನ್ನು ನಿಮಗೆ ಒಪ್ಪಿಸುವುದಷ್ಟೇ ಕರ್ತವ್ಯ’ ಎಂದು ಹೇಳಿ ಸ್ಥಳದಿಂದ ತೆರಳಿದರು. ಬಳಿಕ, ಸ್ಥಳೀಯ ಮುಖಂಡರು ಕುಟುಂಬದವರನ್ನು ಸಮಾಧಾನಪಡಿಸಿ, ಅಂತ್ಯಕ್ರಿಯೆಗೆ ಮನವೊಲಿಸಿದರು.