‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ದೇಶದ ಮೊದಲ ಸಿಡಿಎಸ್ ಆಗಿ ಕೇಂದ್ರ ಮಂತ್ರಿಮಂಡಲ ಹಾಗೂ ಸುರಕ್ಷಾ ಪಡೆಗಳ ಕೊಂಡಿಯಾಗಿದ್ದರಲ್ಲದೇ, ರಾವತ್ ದೇಶರಕ್ಷಣೆ ವಿಷಯ, ಸಾಮರ್ಥ್ಯ, ಬೆಳವಣಿಗೆ, ನವೀಕರಣ ಸೇರಿದಂತೆ ಅನೇಕ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆಗಾರಿಕೆ ಅವರದ್ದಾಗಿತ್ತು. ದೇಶಿ ಉತ್ಪಾದನೆಗೆ ಒತ್ತು ನೀಡಿ ಭಾರತ ಆತ್ಮನಿರ್ಭರದತ್ತ ಸಾಗುವ ಕ್ರಮಗಳ ಬಗ್ಗೆ ಮುತುವರ್ಜಿ ವಹಿಸಿದ್ದರು’ ಎಂದರು.