ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಈ ಹಿಂದೆ ಅಧಿಕಾರ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಜನ ವಿರೋಧಿ ನೀತಿಗಳನ್ನೇ ಅನುಸರಿಸಿವೆ. ಪರ್ಯಾಯ ಜನಪರ ಚಳವಳಿ ಹಾಗೂ ಜನರ ಕಷ್ಟಗಳಿಗೆ ಧ್ವನಿಯಾಗುವ ವ್ಯಕ್ತಿಗಳ ಅಗತ್ಯವಿದೆ. ಅಂಥ ಭರವಸೆಯನ್ನು ಹೋರಾಟದ ಹಿನ್ನೆಲೆಯ ಬಸವರಾಜ ಗುರಿಕಾರ ಮೂಡಿಸಿದ್ದಾರೆ’ ಎಂದರು.