ಧಾರವಾಡ: ನಟ,ನಿರ್ದೇಶಕ, ಹಿರಿತೆರೆ ಹಾಗೂ ಕಿರುತೆರೆ ತಂತ್ರಜ್ಞ ಸುರೇಶ ಕುಲಕರ್ಣಿ (75) ಕೆಲ ಕಾಲದ ಅನಾರೋಗ್ಯ ದಿಂದ ಬುಧವಾರ ನಿಧನರಾದರು.
ಅವಿವಾಹಿತರಾಗಿದ್ದ ಅವರುಇಲ್ಲಿನ ಮಾಳಮಡ್ಡಿಯಲ್ಲಿ ನೆಲೆಸಿದ್ದರು. ನಾಟಕಕಾರ ಹಾಗೂ ನಿರ್ದೇಶಕ ದಿ.ಗಿರೀಶ ಕಾರ್ನಾಡ ಅವರೊಂದಿಗೆ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಹಲವು ವರ್ಷ ಕೆಲಸ ಮಾಡಿದ್ದರು.ಅಂತ್ಯಕ್ರಿಯೆ ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನೆರವೇರಿತು.