ಶ್ರದ್ಧಾಂಜಲಿ: ಮೂರು ಸಾವಿರ ಮಠದ ಎಸ್ಜೆಎಂವಿ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಗೀತ ವಿಭಾಗದಿಂದ ಬಾಲಸುಬ್ರಹ್ಮಣಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿಬಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಅಂಗಡಿ, ಸಂಗೀತ ವಿಭಾಗದ ಮುಖ್ಯಸ್ಥೆ ಜ್ಯೋತಿಲಕ್ಷ್ಮಿ ಡಿ.ಪಿ., ಸಿಸಿಲಿಯಾ ಡಿಕ್ರೂಜ್, ಗುರುರಾಜ ನವಲಗುಂದ, ಸುಪ್ರಿಯಾ ಮಲಶೆಟ್ಟಿ, ಮಹಾದೇವ ಹರಿಜನ ಪಾಲ್ಗೊಂಡಿದ್ದರು.