ಧಾರವಾಡ: ನಾಡಿನ ಶ್ರೇಷ್ಠ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರು, ಪ್ರಾಚೀನ ಸಾಹಿತ್ಯ ಹಾಗೂ ಆಧುನಿಕ ಕಾಲದ ಪರಂಪರೆಯ ಕೊಂಡಿಯಾಗಿ ಸಾಹಿತ್ಯ ಕೃಷಿ ಮಾಡಿದ್ದರು. ಇಂತಹ ಸಾಧನೆ ಮಾಡಿದ್ದ ಅವರು, ಶಿಸ್ತು ಸೌಜನ್ಯದ ವ್ಯಕ್ತಿಯಾಗಿದ್ದರು. ಅವರ ನಾಡು ನುಡಿಯ ಸೇವೆ ಮತ್ತು ಕಾಳಜಿ ಅನನ್ಯವಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ. ತೊಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.