‘ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಅದರ ಅಂಗವಾಗಿಯೇ ನೂತನ ಪ್ರಯತ್ನ ಮಾಡಿದ್ದೇವೆ. ವೃತ್ತಾಕಾರದಲ್ಲಿ ಕಾರ್ಡ್ಬೋರ್ಡ್ ಅನ್ನು ಕತ್ತರಿಸಿ, ಅದರ ಮೇಲೆ ಗಮ್ ಹಾಕಿ ಹೂವಿನ ಪಕಳೆಗಳಂತೆ ಭತ್ತದ ಕಾಳುಗಳನ್ನು ಜೋಡಿಸಲಾಗುವುದು ನಂತರ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಳೆದು, ಅದರ ಕೆಳಗಡೆ ಸ್ಯಾಟಿನ್ ರಿಬ್ಬನ್ಗಳನ್ನು ಉದ್ದಕೆ ಬಿಡಲಾಗಿದೆ’ ಎಂದು ಸಂಘಟನೆಯ ಪ್ರತಿನಿಧಿ ಆದಿತ್ಯಕುಮಾರ್ ಮಾಹಿತಿ ನೀಡಿದರು.