<p><strong>ಹುಬ್ಬಳ್ಳಿ:</strong> ‘ಉತ್ತರ ಕರ್ನಾಟಕ ಭಾಗದಲ್ಲಿ ವಾಸಿಸುವ ಪ್ರತಿಯೊಬ್ಬರು ಈ ಭಾಗದ ಅಭಿವೃದ್ಧಿಗೆ ಒತ್ತುಕೊಡಬೇಕು. ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿದ್ದರೆ, ಸಹಜವಾಗಿ ವಾಸಿಸುವ ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತದೆ’ ಎಂದು ಚಿತ್ರನಟ ಆಶಿಶ್ ವಿದ್ಯಾರ್ಥಿ ಅಭಿಪ್ರಾಯಪಟ್ಟರು.</p>.<p>ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಟೈ ಹುಬ್ಬಳ್ಳಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಟೈಕಾನ್–2026, ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶ’ದ ಸಮಾರೋಪದಲ್ಲಿ ಅವರು ಮಾತನಾಡಿದರು. ‘ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆಯ ತುಡಿತವಿರುತ್ತದೆ. ಅದರ ಗಮ್ಯ ತಲುಪಬೇಕೆಂದರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕು. ಅದರಲ್ಲೂ ಉದ್ಯಮ ವಲಯದಲ್ಲಿ ಎದುರಾಗುವ ಸವಾಲುಗಳನ್ನು ಯಾರು ದಿಟ್ಟತನದಿಂದ ಎದುರಿಸುತ್ತಾರೋ ಅವರು ಮಾತ್ರ ಯಶಸ್ಸಿನ ಉತ್ತುಂಗದಲ್ಲಿ ನಿಲ್ಲುತ್ತಾರೆ’ ಎಂದರು.</p>.<p>ಸ್ವರ್ಣ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ವಿಎಸ್ವಿ ಪ್ರಸಾದ ಮಾತನಾಡಿ, ‘ಈ ಸಮಾವೇಶವು ಉತ್ತರ ಕರ್ನಾಟಕ ಭಾಗದ ಪ್ರತಿಭಾನ್ವಿತರಿಗೆ ವೇದಿಕೆಯಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಅನೇಕರು ಉದ್ಯಮಿಗಳಾಗಿ ಬದಕು ಕಟ್ಟಿಕೊಂಡಿದ್ದು ಅಲ್ಲದೆ, ಸಾಕಷ್ಟು ಮಂದಿಗೆ ಉದ್ಯೋಗವನ್ನೂ ನೀಡಿದ್ದಾರೆ’ ಎಂದರು.</p>.<p>ಬಿ.ಡಿ. ಪಾಟೀಲ ಆ್ಯಂಡ್ ಸನ್ಸ್ ಚೇರಮನ್ ಸುರೇಶ ಪಾಟೀಲ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿಗಳಾದ ಮಾಲತೇಶ ನಿರಂಜನ ಅವರಿಗೆ ‘ಅಗ್ರಿ-ಟೆಕ್’ ಪ್ರಶಸ್ತಿ, ಪ್ರೀತೇಶ ಚೌಧರಿ ಅವರಿಗೆ ‘ಇನೋವೇಷನ್’ ಪ್ರಶಸ್ತಿ, ನಮ್ರತಾ ಟಾಟೆ ಅವರಿಗೆ ‘ವರ್ಷದ ಮಹಿಳಾ ಉದ್ಯಮಿ’ ಪ್ರಶಸ್ತಿ ಹಾಗೂ ಜೈಭಾರತ್ ಫೌಂಡೇಷನ್ಗೆ ‘ವರ್ಷದ ಸೋಷಿಯಲ್ ಉದ್ಯಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಅಮೃತ ಕಬಾಡಿ, ಶಿಲ್ಪಾ ಕಬಾಡಿ, ಅನುರಾಧ ಕಬಾಡಿ, ಪ್ರಸಾಂತ ಹೆಬಸೂರ, ವಿವೇಕ ಪಾಟೀಲ, ವಿಜೇಶ ಸೈಗಲ್ ಇದ್ದರು.</p>.<p><strong>ಎಐ ಕ್ಷೇತ್ರದಲ್ಲಿ ಹೊಸ ಉದ್ಯೋಗ ಸೃಷ್ಟಿ: ಜೋಶಿ</strong> </p><p>ಹುಬ್ಬಳ್ಳಿ: ‘ಜಗತ್ತಿನಲ್ಲಿ ಸೇವಾ ವಲಯ ವೇಗವಾಗಿ ಬೆಳೆಯುತ್ತಿದ್ದು ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಪೂರೈಸಲು ಜ್ಞಾನ ಕೌಶಲ ವೃದ್ಧಿಸಿಕೊಳ್ಳಬೇಕಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಶನಿವಾರ ‘ಟೈಕಾನ್–2026 ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು ‘ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಕೇಂದ್ರಗಳ ಪ್ರಗತಿಗಾಗಿ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು’ ಎಂದರು. </p><p>‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತವು ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ ಎಲ್ಲರಲ್ಲಿತ್ತು. ಆದರೆ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 17 ಕೋಟಿಗೂ ಅಧಿಕ ಹೊಸ ಉದ್ಯೋಗಗಳು ಈ ಕ್ಷೇತ್ರದಲ್ಲಿ ಸೃಷ್ಟಿಯಾಗಲಿವೆ’ ಎಂದರು. ಶಾಸಕ ಅರವಿಂದ ಬೆಲ್ಲದ ಅವರು ‘ಬೆಂಗಳೂರಿನಾಚೆ ಉದ್ಯಮ ಬೆಳವಣಿಗೆ ಪರಿಕಲ್ಪನೆಯಡಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಉತ್ತರ ಕರ್ನಾಟಕ ಭಾಗದಲ್ಲಿ ವಾಸಿಸುವ ಪ್ರತಿಯೊಬ್ಬರು ಈ ಭಾಗದ ಅಭಿವೃದ್ಧಿಗೆ ಒತ್ತುಕೊಡಬೇಕು. ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿದ್ದರೆ, ಸಹಜವಾಗಿ ವಾಸಿಸುವ ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತದೆ’ ಎಂದು ಚಿತ್ರನಟ ಆಶಿಶ್ ವಿದ್ಯಾರ್ಥಿ ಅಭಿಪ್ರಾಯಪಟ್ಟರು.</p>.<p>ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಟೈ ಹುಬ್ಬಳ್ಳಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಟೈಕಾನ್–2026, ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶ’ದ ಸಮಾರೋಪದಲ್ಲಿ ಅವರು ಮಾತನಾಡಿದರು. ‘ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆಯ ತುಡಿತವಿರುತ್ತದೆ. ಅದರ ಗಮ್ಯ ತಲುಪಬೇಕೆಂದರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕು. ಅದರಲ್ಲೂ ಉದ್ಯಮ ವಲಯದಲ್ಲಿ ಎದುರಾಗುವ ಸವಾಲುಗಳನ್ನು ಯಾರು ದಿಟ್ಟತನದಿಂದ ಎದುರಿಸುತ್ತಾರೋ ಅವರು ಮಾತ್ರ ಯಶಸ್ಸಿನ ಉತ್ತುಂಗದಲ್ಲಿ ನಿಲ್ಲುತ್ತಾರೆ’ ಎಂದರು.</p>.<p>ಸ್ವರ್ಣ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ವಿಎಸ್ವಿ ಪ್ರಸಾದ ಮಾತನಾಡಿ, ‘ಈ ಸಮಾವೇಶವು ಉತ್ತರ ಕರ್ನಾಟಕ ಭಾಗದ ಪ್ರತಿಭಾನ್ವಿತರಿಗೆ ವೇದಿಕೆಯಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಅನೇಕರು ಉದ್ಯಮಿಗಳಾಗಿ ಬದಕು ಕಟ್ಟಿಕೊಂಡಿದ್ದು ಅಲ್ಲದೆ, ಸಾಕಷ್ಟು ಮಂದಿಗೆ ಉದ್ಯೋಗವನ್ನೂ ನೀಡಿದ್ದಾರೆ’ ಎಂದರು.</p>.<p>ಬಿ.ಡಿ. ಪಾಟೀಲ ಆ್ಯಂಡ್ ಸನ್ಸ್ ಚೇರಮನ್ ಸುರೇಶ ಪಾಟೀಲ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿಗಳಾದ ಮಾಲತೇಶ ನಿರಂಜನ ಅವರಿಗೆ ‘ಅಗ್ರಿ-ಟೆಕ್’ ಪ್ರಶಸ್ತಿ, ಪ್ರೀತೇಶ ಚೌಧರಿ ಅವರಿಗೆ ‘ಇನೋವೇಷನ್’ ಪ್ರಶಸ್ತಿ, ನಮ್ರತಾ ಟಾಟೆ ಅವರಿಗೆ ‘ವರ್ಷದ ಮಹಿಳಾ ಉದ್ಯಮಿ’ ಪ್ರಶಸ್ತಿ ಹಾಗೂ ಜೈಭಾರತ್ ಫೌಂಡೇಷನ್ಗೆ ‘ವರ್ಷದ ಸೋಷಿಯಲ್ ಉದ್ಯಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಅಮೃತ ಕಬಾಡಿ, ಶಿಲ್ಪಾ ಕಬಾಡಿ, ಅನುರಾಧ ಕಬಾಡಿ, ಪ್ರಸಾಂತ ಹೆಬಸೂರ, ವಿವೇಕ ಪಾಟೀಲ, ವಿಜೇಶ ಸೈಗಲ್ ಇದ್ದರು.</p>.<p><strong>ಎಐ ಕ್ಷೇತ್ರದಲ್ಲಿ ಹೊಸ ಉದ್ಯೋಗ ಸೃಷ್ಟಿ: ಜೋಶಿ</strong> </p><p>ಹುಬ್ಬಳ್ಳಿ: ‘ಜಗತ್ತಿನಲ್ಲಿ ಸೇವಾ ವಲಯ ವೇಗವಾಗಿ ಬೆಳೆಯುತ್ತಿದ್ದು ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಪೂರೈಸಲು ಜ್ಞಾನ ಕೌಶಲ ವೃದ್ಧಿಸಿಕೊಳ್ಳಬೇಕಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಶನಿವಾರ ‘ಟೈಕಾನ್–2026 ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು ‘ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಕೇಂದ್ರಗಳ ಪ್ರಗತಿಗಾಗಿ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು’ ಎಂದರು. </p><p>‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತವು ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ ಎಲ್ಲರಲ್ಲಿತ್ತು. ಆದರೆ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 17 ಕೋಟಿಗೂ ಅಧಿಕ ಹೊಸ ಉದ್ಯೋಗಗಳು ಈ ಕ್ಷೇತ್ರದಲ್ಲಿ ಸೃಷ್ಟಿಯಾಗಲಿವೆ’ ಎಂದರು. ಶಾಸಕ ಅರವಿಂದ ಬೆಲ್ಲದ ಅವರು ‘ಬೆಂಗಳೂರಿನಾಚೆ ಉದ್ಯಮ ಬೆಳವಣಿಗೆ ಪರಿಕಲ್ಪನೆಯಡಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>