‘ರಾಮ ನವಮಿ ಅಂಗವಾಗಿ 10ರಂದು ಸಂಜೆ4ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ಶೋಭಾಯಾತ್ರೆ ಹಾಗೂಮೂರುಸಾವಿರ ಮಠದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ.ಎ.ಸಿ. ವಾಲಿ ಮಹಾರಾಜ, ಎಸ್.ಎಸ್.ಕೆ ಸಮಾಜದ ಆಧ್ಯಾತ್ಮಿಕ ಚಿಂತಕರಾದ ವಿಜಯಾ ಮಾತಾ, ಭಾರತ ವರ್ಷ ಗುರೂಜೀ, ಎಸ್.ಎಸ್.ಕೆ ಸಮಾಜ ಮುಖ್ಯ ಧರ್ಮದರ್ಶಿ ನೀಲಕಂಠ ಜಡಿ ಭಾಗವಹಿಸುವರು’ ಎಂದು ಹೇಳಿದರು.