ರಥದ ಎರಡು ಬದಿಗಳಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಉತ್ತುತ್ತೆ, ಬೆಲ್ಲ, ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮನದಲ್ಲಿ ಸಂಕಲ್ಪ ಮಾಡಿಕೊಂಡರು. ಅಲ್ಲದೇ, ಕುಟುಂಬದ ಸದಸ್ಯರ ಜತೆಗೆ ಶ್ರದ್ಧಾಭಕ್ತಿಯಿಂದ ತೇರನ್ನು ಎಳೆದು ಪುನಿತರಾದರು. ಡೊಳ್ಳು ಕುಣಿತ, ಜಾಂಝ್ ಮೇಳ, ಜಗ್ಗಲಗಿ ಮೇಳ ಜಾತ್ರೆಯ ಕಳೆ ಹೆಚ್ಚಿಸಿತ್ತು. ಗೊಂಬೆ ಕುಣಿಗಳನ್ನು ಕಂಡು ಮಕ್ಕಳು ಪುಳಕಿತರಾದರು.