‘ಬಸವಣ್ಣನವರು ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು, ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು, ವೀರಶೈವ ಧರ್ಮ ಅಭಿವೃದ್ಧಿಪಡಿಸಿದರು, ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತ ಬೋಧಿಸಿದರು ಎಂಬ ತಪ್ಪು ಮಾಹಿತಿಗಳು ಪಠ್ಯದಲ್ಲಿವೆ. ಸ್ತ್ರೀಯರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಬಸವಣ್ಣನವರು ಉಪನಯನ ಧಿಕ್ಕರಿಸಿದರು. ಇಷ್ಟಲಿಂಗ ಸೃಷ್ಟಿಕರ್ತರಾದ ಅವರು ಯಾರಿಂದಲೂ ಲಿಂಗ ದೀಕ್ಷೆ ಪಡೆಯಲಿಲ್ಲ. ಲಿಂಗಾಯತ ಧರ್ಮ ಸ್ಥಾಪಿಸದರೇ ಹೊರತು, ವೀರಶೈವ ಧರ್ಮವನ್ನಲ್ಲ. ಮಾನವನ ಉದ್ಧಾರಕ್ಕಾಗಿ ಷಟಸ್ಥಲ ಸಿದ್ಧಾಂತ ಬೋಧಿಸಿದರು’ ಎಂದು ಹೇಳಿದರು.