‘ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಂಗೀತದೊಂದಿಗೆ ಮರಳು ಕಲೆಯ ಗಾನಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಾನಂದಾ ಗೋಸಾವಿ ಅವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಅನಿಲ ಮೇತ್ರಿ, ವಾಯಲಿನ್ದಲ್ಲಿ ವಾದಿರಾಜ ನಿಂಬರಗಿ, ಹಾರ್ಮೋನಿಯಂನಲ್ಲಿ ಪರಶುರಾಮ ಕಟ್ಟಿಸಂಗಾವಿ ಸಾಥ್ ನೀಡುವರು. ಮರಳು ಕಲಾವಿದ ಮಂಜುನಾಥ ಹಿರೇಮಠ ಅವರು ಗಾಯನಕ್ಕೆ ತಕ್ಕಂತೆ ಮರಳು ಕಲೆಯನ್ನು ಅನಾವರಣ ಮಾಡುವರು’ ಎಂದರು.