ಹುಬ್ಬಳ್ಳಿ: ಕನ್ನಡದ ಕವಯತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ 2022ನೇ ಸಾಲಿನ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಧಾರವಾಡ ಜಿಲ್ಲೆಯ ಗುಡಗೇರಿಯ ಭಾಗ್ಯಜ್ಯೋತಿ ಹಿರೇಮಠ ಅವರ ‘ಬಿದಿರ ಬಿನ್ನಹ’ ಕವನ ಸಂಕಲನ ಆಯ್ಕೆ ಆಗಿದೆ.
ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ‘ವಿಭಾ ಸಾಹಿತ್ಯ ಪ್ರಶಸ್ತಿ–2022’ರ ಸಂಚಾಲಕರಾದ ಸುನಂದಾ,ಪ್ರಕಾಶ ಕಡಮೆ ತಿಳಿಸಿದ್ದಾರೆ.
‘ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ಧ, ಗಾಂಧಿ, ಬಸವ, ಅಕ್ಕ ಇವರನ್ನು ನೇರವಾಗಿ ಹೆಸರಿಸದೆ ಅವರ ತಾತ್ವಿಕತೆಯನ್ನು ಮಾತ್ರ ಕಾವ್ಯವಾಗಿ ಕಟ್ಟುವ ಕಲೆಯನ್ನು ಮೈಗೂಡಿಸಿಕೊಂಡ ಬಗೆಗಾಗಿ ‘ಬಿದಿರ ಬಿನ್ನಹ’ ಆಯ್ಕೆ ಮಾಡಲಾಗಿದೆ’ ಎಂದು ತೀರ್ಪುಗಾರರಾದ ಸ.ಉಷಾ ಮತ್ತು ಕೇಶವ ಮಳಗಿ ಹೇಳಿದ್ದಾರೆ.