ನಂತರ ಸಾಧನಕೇರಿ, ಕಿತ್ತೂರು ಚೆನ್ನಮ್ಮ ಪಾರ್ಕ್, ಕೆಲಗೇರಿ ಉದ್ಯಾನಕ್ಕೂ ತೆರಳಿ ವಾಯು ವಿಹಾರಿಗಳನ್ನುಭೇಟಿ ಮಾಡಿ ಮತಯಾಚಿಸಿದರು. ನಂತರ ವಾರ್ಡ್ 14, 15ರಲ್ಲಿ ರೋಡ್ ಶೋ ನಡೆಸಿದರು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಮಾಸಿಕ ₹6ಸಾವಿರ ನೀಡಲಾಗುವುದು. ಬಡವರ ಕಲ್ಯಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಭರವಸೆ ನೀಡಿದರು.