ಸಿತಾರ್ರತ್ನ ಸಮಿತಿಯು ಉಸ್ತಾದ್ ರಹೀಮತ್ ಖಾನ್ ಅವರ 68ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಂಗೀತೋತ್ಸವದಲ್ಲಿ ಗಾಯನ, ವಾದನ ಹಾಗೂ ನರ್ತನಗಳು ಮೇಳೈಸಿದವು. ಶುಕ್ರವಾರ ಹಾಗೂ ಶನಿವಾರ ಸಂಜೆಗಷ್ಟೇ ಸೀಮಿತವಾಗಿದ್ದ ಸಂಗೀತೋತ್ಸವ, ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಗೀತದ ರಸದೌತಣ ಬಡಿಸಿತು.