‘ಬುಧವಾರದಿಂದಲೇ ಕಾರ್ಯಕ್ರಮ ಆರಂಭವಾಗಿದೆ. ಹತ್ತು ವಾರಗಳ ಕಾಲ ಪ್ರತಿ ಬುಧವಾರ ಬೆಳಿಗ್ಗೆ 7.15ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಜಮೀನುಗಳ ಸಮತಟ್ಟು, ತುಂತುರು ಹನಿ ನೀರಾವರಿ, ಬೆಳೆಗೆ ಅವಶ್ಯವಾಗಿರುವ ನೀರು, ನೀರಿನ ಲಭ್ಯತೆ, ಇಳುವರಿ ಪರೀಕ್ಷೆ, ಮಳೆಯಾಶ್ರಿತ ಬೆಳೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತಜ್ಞರು ರೈತರಿಗೆ ಮಾಹಿತಿ ನೀಡಲಿದ್ದಾರೆ’ ಎಂದು ವಾಲ್ಮಿಯ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು.