ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ಪರಿಷತ್ ಅಧ್ಯಕ್ಷರ ಭಾವಚಿತ್ರ: ಮುದ್ದುಕೃಷ್ಣ ಆಕ್ಷೇಪ

Last Updated 6 ಜನವರಿ 2019, 9:15 IST
ಅಕ್ಷರ ಗಾತ್ರ

ಧಾರವಾಡ: ಸುಗಮ ಸಂಗೀತ ಪ್ರಕಾರವನ್ನು ಸಾಹಿತ್ಯ ಪರಿಷತ್ತು ನಿರ್ಲಕ್ಷಿಸುತ್ತಿದೆ. ಸುಗಮ ಸಂಗೀತಕ್ಕಾಗಿ ಪ್ರತ್ಯೇಕ ಗೋಷ್ಠಿಯ ಮಾಡಬಹುದಿತ್ತು ಎಂದು ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ ಅಭಿಪ್ರಾಯಪಟ್ಟರು.

ಸಮಾನಾಂತರ ವೇದಿಕೆ 2ರಲ್ಲಿ ನಡೆದ ಕಾವ್ಯ ಪ್ರಚಾರದ ವಿಭಿನ್ನ ನೆಲೆಗಳು ಗೋಷ್ಠಿಯಲ್ಲಿ ಮಾತನಾಡಿ, ಸುಗಮ ಸಂಗೀತಕ್ಕೆಪರಿಷತ್ತು ಪ್ರತ್ಯೇಕ ಗೋಷ್ಠಿ ಕೊಡುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ನಾನು 40 ವರ್ಷಗಳಿಂದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಪರಿಷತ್ತಿನ ಅಧ್ಯಕ್ಷರು ಎಂದೂ ತಮ್ಮ ಭಾವಚಿತ್ರವನ್ನು ಸಮ್ಮೇಳನದಲ್ಲಿ ಬಳಸುತ್ತಿರಲಿಲ್ಲ. ಸಮ್ಮೇಳನದ ಅಧ್ಯಕ್ಷರ ಭಾವಚಿತ್ರಗಳು ಮಾತ್ರ ವೇದಿಕೆ, ಬ್ಯಾಕ್‌ಡ್ರಾಪ್ ಮತ್ತು ಬ್ಯಾನರ್‌ಗಳಲ್ಲಿ ಇರುತ್ತಿದ್ದವು. ಆದರೆ ಈ ಬಾರಿ ಹಾಗಾಗಿಲ್ಲ. ಪರಿಷತ್ತಿನ ಅಧ್ಯಕ್ಷರಭಾವಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT