'ಮೋಕ್ಷ ಸಾಧನೆ ಹಾಗೂ ಸಮಾಜದ ಒಳಿತಿಗಾಗಿ ಮಠಾಧೀಶರು ಶ್ರಮಿಸಬೇಕು. ಆದರೆ, ಇತ್ತೀಚೆಗೆ ಕೆಲವರು ಜನಪ್ರತಿನಿಧಿಗಳಿಗೆ ಜೈಕಾರ ಹಾಕುವುದು, ಅವರ ಹಿಂದೆ ಓಡಾಡುವುದು, ಅನುದಾನಕ್ಕಾಗಿ ಕೈಚಾಚುವುದು ಮಾಡುತ್ತಿದ್ದಾರೆ. ಆಸ್ತಿಗಾಗಿ, ಐಷಾರಾಮಿ ಬದುಕಿಗಾಗಿ ಮಠದ ಪೀಠಾಧಿಪತಿಗಳಾಗುತ್ತಿದ್ದಾರೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಬಡೆದಾಡುತ್ತಿದ್ದಾರೆ. ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಧರ್ಮ ಮತ್ತು ಕ್ಷಾತ್ರ ತೇಜಸ್ಸು ಹಾಳಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.