<p><strong>ಧಾರವಾಡ</strong>: 2016ರ ಜೂನ್ 15ರಂದು (ಬುಧವಾರ) ಬೆಳಿಗ್ಗೆ ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.</p><p>ಎಂದಿನಂತೆ ಬೆಳಿಗ್ಗೆ ತನ್ನದೇ ಆದ ಜಿಮ್ಗೆ ಹೋಗಿದ್ದ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ (35) ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.</p><p>ಬೆಳಿಗ್ಗೆ ಯೋಗೀಶಗೌಡ ಜಿಮ್ಗೆ ಹೋಗುವ ಮೊದಲು ಅಲ್ಲಿ 8 ಬೈಕ್ ಮತ್ತು ಒಂದು ಕಪ್ಪು ಕಾರಿನಲ್ಲಿ ಹಲವು ಜನ ತಲವಾರು, ಮಚ್ಚು ಹಿಡಿದುಕೊಂಡು ಜಿಮ್ ಪಕ್ಕದ ರಸ್ತೆಯಲ್ಲಿ ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.</p>.ಶಾಸಕ ವಿನಯ ಕುಲಕರ್ಣಿ ಜಿಲ್ಲಾಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದ ಅಪರಾಧಿ.<h2><ins>ಜಿಮ್ ಸೆಂಟರ್ನಲ್ಲಿ ಪ್ರತಿದಿನ ಇರುವವರೂ ಇರಲಿಲ್ಲ...</ins></h2><p>ಬೆಳಿಗ್ಗೆ 6.30 ರಿಂದ 7.30ರ ವರೆಗೆ ಮಹಿಳೆಯರು ಜಿಮ್ ಮಾಡಲು ಅವಕಾಶ ಇದ್ದು, ಆ ಸಮಯದಲ್ಲಿ ಮೂರ್ನಾಲ್ಕು ಜನ ಹೆಣ್ಣು ಮಕ್ಕಳು ಮಾತ್ರ ಇದ್ದರು. ಗಂಡು ಮಕ್ಕಳು ಇರಲಿಲ್ಲ. ಬೆಳಗಿನ ಜಾವ 7.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ಕಾಂಪ್ಲೆಕ್ಸ್ನಲ್ಲಿನ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.</p><p>ಆದರೆ ಕೊಲೆಯ ಮಾಹಿತಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ 8.30ರ ಹೊತ್ತಿಗೆ ಹೊತ್ತಿಗೆ ಇಡೀ ಆವರಣವೇ ಜನಸಾಗರದಿಂದ ತುಂಬಿತ್ತು. ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.</p>.ಯೋಗೀಶಗೌಡ ಕೊಲೆ ಕೇಸಲ್ಲಿ ವಿನಯ ಕುಲಕರ್ಣಿ ಅಪರಾಧಿ: ಪ್ರಕರಣ ಸಾಗಿ ಬಂದ ಹಾದಿ....<h2><ins> ಸುಳಿವಿಗಾಗಿ ಪೊಲೀಸರ ಹುಡುಕಾಟ..</ins></h2><p>ಆರೋಪಿಗಳು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸುಳಿವು ಬಿಟ್ಟು ಹೋಗಿರಲಿಲ್ಲ. ಅಲ್ಲಿದ್ದ ಯೋಗೀಶಗೌಡ ಅವರ ಚಪ್ಪಲಿಗಳು ಹಾಗೂ ಕೆಲ ವಸ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.</p><p>ಈ ಕುರಿತು ಪ್ರತಿಕ್ರಿಯಿಸಿದ್ದ ಅಂದಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ‘ಐದಾರು ಜನರ ತಂಡವೊಂದು ಯೋಗೀಶಗೌಡ ಅವರ ಮೇಲೆ ಆಕ್ರಮಣ ಮಾಡಿ ಕೊಲೆ ಮಾಡಿರುವ ಮಾಹಿತಿ ಗೊತ್ತಾಗಿದೆ. ಕೊಲೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ’ ಎಂದಿದ್ದರು.</p><h2><ins>26 ಕಡೆಗಳಲ್ಲಿ ಹೊಡೆತ...</ins></h2><p>ಕೊಲೆಗೆ ದುಷ್ಕರ್ಮಿಗಳು ತಲವಾರ ಹಾಗೂ ಚಾಕುಗಳನ್ನು ಬಳಸಿದ್ದರು. ಯೋಗೀಶಗೌಡ ಅವರ ತಲೆ, ಕೈ, ಕುತ್ತಿಗೆ ಹಾಗೂ ಕಾಲು ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಣೆ ಮೇಲೆ 4 ಬಲವಾದ ಹೊಡೆತಗಳು, ಕುತ್ತಿಗೆಗೆ ಮೂರು, ಎದೆಯ ಮೇಲೆ, ಬಲಗೈಗೆ, ಪಕ್ಕಡಿಗಳಿಗೆ, ಮೊಣಕಾಲಿಗೆ ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಹೊಡೆದಿದ್ದರು.</p><p>ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪತ್ನಿ ಮಲ್ಲಮ್ಮ ಮತ್ತು ಸಹೋದರ ಗುರುನಾಥಗೌಡ ಅವರ ರೋದನ ಮುಗಿಲುಮುಟ್ಟಿತ್ತು. ಶವವನ್ನು ಜಿಲ್ಲಾ ಆಸ್ಪತ್ರೆ ಸಾಗಿಸಲಾಯಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲೇ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: 2016ರ ಜೂನ್ 15ರಂದು (ಬುಧವಾರ) ಬೆಳಿಗ್ಗೆ ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.</p><p>ಎಂದಿನಂತೆ ಬೆಳಿಗ್ಗೆ ತನ್ನದೇ ಆದ ಜಿಮ್ಗೆ ಹೋಗಿದ್ದ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ (35) ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.</p><p>ಬೆಳಿಗ್ಗೆ ಯೋಗೀಶಗೌಡ ಜಿಮ್ಗೆ ಹೋಗುವ ಮೊದಲು ಅಲ್ಲಿ 8 ಬೈಕ್ ಮತ್ತು ಒಂದು ಕಪ್ಪು ಕಾರಿನಲ್ಲಿ ಹಲವು ಜನ ತಲವಾರು, ಮಚ್ಚು ಹಿಡಿದುಕೊಂಡು ಜಿಮ್ ಪಕ್ಕದ ರಸ್ತೆಯಲ್ಲಿ ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.</p>.ಶಾಸಕ ವಿನಯ ಕುಲಕರ್ಣಿ ಜಿಲ್ಲಾಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದ ಅಪರಾಧಿ.<h2><ins>ಜಿಮ್ ಸೆಂಟರ್ನಲ್ಲಿ ಪ್ರತಿದಿನ ಇರುವವರೂ ಇರಲಿಲ್ಲ...</ins></h2><p>ಬೆಳಿಗ್ಗೆ 6.30 ರಿಂದ 7.30ರ ವರೆಗೆ ಮಹಿಳೆಯರು ಜಿಮ್ ಮಾಡಲು ಅವಕಾಶ ಇದ್ದು, ಆ ಸಮಯದಲ್ಲಿ ಮೂರ್ನಾಲ್ಕು ಜನ ಹೆಣ್ಣು ಮಕ್ಕಳು ಮಾತ್ರ ಇದ್ದರು. ಗಂಡು ಮಕ್ಕಳು ಇರಲಿಲ್ಲ. ಬೆಳಗಿನ ಜಾವ 7.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ಕಾಂಪ್ಲೆಕ್ಸ್ನಲ್ಲಿನ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.</p><p>ಆದರೆ ಕೊಲೆಯ ಮಾಹಿತಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ 8.30ರ ಹೊತ್ತಿಗೆ ಹೊತ್ತಿಗೆ ಇಡೀ ಆವರಣವೇ ಜನಸಾಗರದಿಂದ ತುಂಬಿತ್ತು. ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.</p>.ಯೋಗೀಶಗೌಡ ಕೊಲೆ ಕೇಸಲ್ಲಿ ವಿನಯ ಕುಲಕರ್ಣಿ ಅಪರಾಧಿ: ಪ್ರಕರಣ ಸಾಗಿ ಬಂದ ಹಾದಿ....<h2><ins> ಸುಳಿವಿಗಾಗಿ ಪೊಲೀಸರ ಹುಡುಕಾಟ..</ins></h2><p>ಆರೋಪಿಗಳು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸುಳಿವು ಬಿಟ್ಟು ಹೋಗಿರಲಿಲ್ಲ. ಅಲ್ಲಿದ್ದ ಯೋಗೀಶಗೌಡ ಅವರ ಚಪ್ಪಲಿಗಳು ಹಾಗೂ ಕೆಲ ವಸ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.</p><p>ಈ ಕುರಿತು ಪ್ರತಿಕ್ರಿಯಿಸಿದ್ದ ಅಂದಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ‘ಐದಾರು ಜನರ ತಂಡವೊಂದು ಯೋಗೀಶಗೌಡ ಅವರ ಮೇಲೆ ಆಕ್ರಮಣ ಮಾಡಿ ಕೊಲೆ ಮಾಡಿರುವ ಮಾಹಿತಿ ಗೊತ್ತಾಗಿದೆ. ಕೊಲೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ’ ಎಂದಿದ್ದರು.</p><h2><ins>26 ಕಡೆಗಳಲ್ಲಿ ಹೊಡೆತ...</ins></h2><p>ಕೊಲೆಗೆ ದುಷ್ಕರ್ಮಿಗಳು ತಲವಾರ ಹಾಗೂ ಚಾಕುಗಳನ್ನು ಬಳಸಿದ್ದರು. ಯೋಗೀಶಗೌಡ ಅವರ ತಲೆ, ಕೈ, ಕುತ್ತಿಗೆ ಹಾಗೂ ಕಾಲು ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಣೆ ಮೇಲೆ 4 ಬಲವಾದ ಹೊಡೆತಗಳು, ಕುತ್ತಿಗೆಗೆ ಮೂರು, ಎದೆಯ ಮೇಲೆ, ಬಲಗೈಗೆ, ಪಕ್ಕಡಿಗಳಿಗೆ, ಮೊಣಕಾಲಿಗೆ ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಹೊಡೆದಿದ್ದರು.</p><p>ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪತ್ನಿ ಮಲ್ಲಮ್ಮ ಮತ್ತು ಸಹೋದರ ಗುರುನಾಥಗೌಡ ಅವರ ರೋದನ ಮುಗಿಲುಮುಟ್ಟಿತ್ತು. ಶವವನ್ನು ಜಿಲ್ಲಾ ಆಸ್ಪತ್ರೆ ಸಾಗಿಸಲಾಯಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲೇ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>