<p><strong>ಧಾರವಾಡ</strong>: ‘ಪತಿ ಯೋಗೀಶ್ಗೌಡ ಗೌಡರ್ ನೆನಪಿನಲ್ಲೇ ಜೀವನ ಮಾಡುತ್ತಿದ್ದೇನೆ, ಈಗಲೂ ಅವರು ನನ್ನ ಜತೆಯಲ್ಲೇ ಇದ್ದಾರೆ, ಮಕ್ಕಳ ಬೆನ್ನಹಿಂದೆಯೇ ಇದ್ದಾರೆ ಎಂದು ಭಾವಿಸಿದ್ದೇನೆ. ಪತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವವರು ಜೈಲಿನಲ್ಲಿ ಅನುಭವಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ನೋವನ್ನು ಕಳೆದ 10 ವರ್ಷಗಳಲ್ಲಿ ಅನುಭವಿಸಿದ್ದೇನೆ’ ಎಂದು ಮಲ್ಲಮ್ಮ ಪ್ರತಿಕ್ರಿಯಿಸಿದರು. </p><p>ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನಮ್ಮ ಜತೆಯೇ ಇದ್ದ ಮಹಾಂಬಳೇಶ ಹೊಂಗಲ ಎಂಬಾತನೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದೇನೆ. ಆತ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದನ್ನು ನಂಬಿರಲಿಲ್ಲ, ಅವನು ಇದ್ದಿದ್ದು ಬಹಳ ನೋವುಂಟು ಮಾಡಿದೆ’ ಎಂದರು. </p><p>‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಕೊರವರ ಬಹಳಷ್ಟು ಹೋರಾಟ ಮಾಡಿದ್ದಾರೆ. ಅವರು ಯಾವತ್ತೂ ಭೇದಭಾವ ಮಾಡಿಲ್ಲ. ನಮ್ಮನ್ನು ಬಿಟ್ಟುಕೊಟ್ಟಿಲ್ಲ’ ಎಂದರು.</p>.ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ .ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಪತಿ ಯೋಗೀಶ್ಗೌಡ ಗೌಡರ್ ನೆನಪಿನಲ್ಲೇ ಜೀವನ ಮಾಡುತ್ತಿದ್ದೇನೆ, ಈಗಲೂ ಅವರು ನನ್ನ ಜತೆಯಲ್ಲೇ ಇದ್ದಾರೆ, ಮಕ್ಕಳ ಬೆನ್ನಹಿಂದೆಯೇ ಇದ್ದಾರೆ ಎಂದು ಭಾವಿಸಿದ್ದೇನೆ. ಪತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವವರು ಜೈಲಿನಲ್ಲಿ ಅನುಭವಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ನೋವನ್ನು ಕಳೆದ 10 ವರ್ಷಗಳಲ್ಲಿ ಅನುಭವಿಸಿದ್ದೇನೆ’ ಎಂದು ಮಲ್ಲಮ್ಮ ಪ್ರತಿಕ್ರಿಯಿಸಿದರು. </p><p>ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನಮ್ಮ ಜತೆಯೇ ಇದ್ದ ಮಹಾಂಬಳೇಶ ಹೊಂಗಲ ಎಂಬಾತನೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದೇನೆ. ಆತ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದನ್ನು ನಂಬಿರಲಿಲ್ಲ, ಅವನು ಇದ್ದಿದ್ದು ಬಹಳ ನೋವುಂಟು ಮಾಡಿದೆ’ ಎಂದರು. </p><p>‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಕೊರವರ ಬಹಳಷ್ಟು ಹೋರಾಟ ಮಾಡಿದ್ದಾರೆ. ಅವರು ಯಾವತ್ತೂ ಭೇದಭಾವ ಮಾಡಿಲ್ಲ. ನಮ್ಮನ್ನು ಬಿಟ್ಟುಕೊಟ್ಟಿಲ್ಲ’ ಎಂದರು.</p>.ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ .ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>