ಮಾಸ್ತಿ ಅವರಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುವೆಂಪು, ಆನಂದಕಂದ, ಬಸವರಾಜ ಕಟ್ಟೀಮನಿ, ಯು.ಆರ್.ಅನಂತಮೂರ್ತಿ, ದೇವನೂರು ಮಹಾದೇವ, ಪಿ.ಲಂಕೇಶ್, ವೈದೇಹಿ, ಯಶವಂತ ಚಿತ್ತಾಲ, ಮಾಲತಿ ಪಟ್ಟಣಶೆಟ್ಟಿ, ವಿನಯಾ, ಸುನಂದಾ ಕಡಮೆ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಶಾಂತಿ ಕೆ.ಅಪ್ಪಣ್ಣ ಹೀಗೆ ಕನ್ನಡ ಕಥಾ ಪರಂಪರೆಯಲ್ಲಿನ ಪ್ರಾತಿನಿಧಿಕ ಕಥೆಗಾರರ ಆಯ್ದ ಕಥೆಗಳನ್ನು ಬಾನುಲಿಗೆ ಅಳವಡಿಸಿಕೊಂಡು, ಕೇಳುಗರಿಗೆ ಕೇಳಿಸಿತು.