ಶಿವಮೊಗ್ಗ: ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನ ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ.
ಮಧ್ಯರಾತ್ರಿ ಒಂದುವರೆ ಗಂಟೆ ಸಮಯದಲ್ಲಿಭಾರಿ ಶಬ್ದದೊಂದಿಗೆ ಸುಮಾರು ಎರಡು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ ಶುಂಠಿ ಹಕ್ಲು, ಯಡೂರು ಸುತ್ತಮುತ್ತ ಈ ಘಟನೆ ನಡೆದಿದೆ.
ಭಯಭೀತರಾಗಿ ಮನೆಯಿಂದ ಜನರು ಹೊರಬಂದಿದ್ದಾರೆ.ಪಾತ್ರೆ ಪಗಡಗಳೆಲ್ಲಾ ಅಲ್ಲಾಡಿದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ.