ಒಳ್ಳೆಯ ಅಭ್ಯರ್ಥಿಯನ್ನು ಗುರುತಿಸಿ ಮತ ಹಾಕಬೇಕು. ಮತದಾನ ಮಾಡದೇ ಅಥವಾ ತಪ್ಪು ಆಯ್ಕೆ ಮಾಡಿ ಪಶ್ಚಾತ್ತಾಪ ಪಡುವುದು ಸಲ್ಲದು. ಕೆಟ್ಟ ರಾಜಕಾರಣಿಗಳ ಬಗ್ಗೆ ಮಾತನಾಡುವುದು ಸುಲಭ. ಆದರೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮದೇ ಜವಾಬ್ದಾರಿ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದಷ್ಟೂ ಉತ್ತಮ ಫಲಿತಾಂಶದ ಅವಕಾಶ ಹೆಚ್ಚು.
–ಜಾವಗಲ್ ಶ್ರೀನಾಥ್, ಹಿರಿಯ ಕ್ರಿಕೆಟಿಗ/ ಐಸಿಸಿ ರೆಫರಿ