ಭಾರತಿ ಹೆಸರಿನ ಈ ಕಾಡನೆಯನ್ನು ತಾಯಿ ಭಾನುಮತಿ ಜತೆ ಹಾಸನ ಜಿಲ್ಲೆ ಸಕಲೇಶಪುರದ ಬಳಿ ಸೆರೆಹಿಡಿದ ನಂತರ ಪಳಗಿಸಲು ಸಕ್ರೆಬೈಲು ಆನೆ ಬಿಡಾರದಲ್ಲಿ ಇರಿಸಲಾಗಿತ್ತು. ನಿತ್ಯದಂತೆ ಮೇ 24ರಂದು ಮಾವುತರು ಸ್ನಾನ ಮಾಡಿಸಿ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದರು. 25ರ ಬೆಳಿಗ್ಗೆ ಸ್ನಾನ ಮಾಡಿಸಲು ಕರೆದುಕೊಂಡು ಬರಲು ಹೋದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.