‘ಈ ಭಾಗದಲ್ಲಿ 15ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ಆಗಾಗ್ಗೆ ಬೆಳೆ ನಾಶ ಮಾಡುತ್ತಿವೆ. ಹೀಗಾಗಿ ಇವುಗಳ ಸೆರೆಗೆ ಅನುಮತಿ ಕೋರಲಾಗಿದ್ದು, ಎರಡು ಸಲಗಗಳ ಸೆರೆಗೆ ಅನುಮತಿ ಸಿಕ್ಕಿತ್ತು. ಉಳಿದ ಆನೆಗಳನ್ನು ಕಾಡಿನ ಮೂಲಕವೇ ಕಾವೇರಿ ಮತ್ತು ಮುತ್ತತ್ತಿ ವನ್ಯಧಾಮದತ್ತ ಕಳುಹಿಸುವ ಪ್ರಯತ್ನ ನಡೆಯಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು.