ಗಣಪತಿ ಮಂಡಳಿಯವರು ಒತ್ತಾಯಪೂರ್ವಕವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ, ಧ್ವನಿವರ್ಧಕ ಬಳಕೆಗೆ ಎಸ್ಡಿಪಿಒ, ಸಿಪಿಐ ಕಚೇರಿಯಲ್ಲಿ ಸ್ಥಾಪಿಸಿರುವ ಸಿಂಗಲ್ ವಿಂಡೋದಲ್ಲಿ ಅನುಮತಿ ಪತ್ರ ಪಡೆಯಬೇಕು. ಬೆಂಕಿ ಅವಘಡ ತಡೆಗಟ್ಟುವ ಸಲುವಾಗಿ ಆಕಸ್ಮಿಕ ಬೆಂಕಿ ಆರಿಸುವ ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೆಟ್, ಫೈರ್ ಎಕ್ಸ್ಟಿಂಗಿಷರ್ ಇಟ್ಟುಕೊಳ್ಳಬೇಕು. ಮನರಂಜನಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ನೇಮಿಸಿ ಗುಂಪನ್ನು ನಿಯಂತ್ರಿಸಬೇಕು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಬೇಕು ಎಂದುಗಣೇಶ ಮಂಡಳಿ, ಸಂಘಟಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.