ಬೆಳಿಗ್ಗೆ 9.30 ರಿಂದ 12.30 ಗಂಟೆಯವರೆಗೆ ಅರೆ ವೈದ್ಯಕೀಯ ಕೋರ್ಸ್ಗಳ ಪರೀಕ್ಷೆ ನಡೆದಿತ್ತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಡಾ.ಹೂಗಾರ ಅವರು ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು. ಬಳಿಕ ಇನ್ನೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಲೆಂದು ಹೊರಬಂದಾಗ ಕಾರಿನ ಮುಂದಿನ ಗಾಜನ್ನು ಒಡೆದಿರುವುದು ಕಂಡುಬಂದಿದೆ.
‘ಒಂದು ಸರ್ಕಾರಿ ಹಾಗೂ ಮೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದೇನೆ. ಪರೀಕ್ಷಾ ಕೇಂದ್ರದ ಸುತ್ತ 100 ಮೀ. ಯಾರೂ ಇರಬಾರದು ಎಂಬ ನಿಯಮವಿದೆ. ಆದರೆ, ಇಲ್ಲಿ ಬಹಳಷ್ಟು ಜನರು ಇದ್ದರು. ಡಿಬಾರ್ ಆಗಿರುವ ವಿದ್ಯಾರ್ಥಿಗಳೇ ಕಾರಿಗೆ ಕಲ್ಲು ಎಸೆದಿರುವ ಶಂಕೆ ಇದೆ’ ಎಂದು ಡಾ.ವೈ.ಕೆ.ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.