‘ನಾಮಪತ್ರ ಹಿಂಪಡೆಯಲು ಫೆ. 18 ಕೊನೆಯ ದಿನವಾಗಿತ್ತು. ಆ ದಿನ ಮಲ್ಲನಗೌಡ ಪಾಟೀಲ ಅವರು ವಿಜಯಪುರದಲ್ಲಿರುವ ನಮ್ಮ ನಿವಾಸಕ್ಕೆ ತೆರಳಿ, ನಿಮ್ಮ ಪುತ್ರ ಸಂಕೇತ ಅವರ ನಾಮಪತ್ರ ಹಿಂಪಡೆಯಬೇಕು’ ಎಂದು ತಂದೆಯ ಮೇಲೆ ಒತ್ತಡ ಹಾಕಿದ್ದಾರೆ. ಇದಕ್ಕೆ ಅವರು ನಿರಾಕರಿಸಿದಾಗ, ‘ಶಾಸಕರು ನಿಮ್ಮನ್ನು ನೋಡಿಕೊಳ್ಳುತ್ತಾರೆ’ ಎಂದು ಜೀವಬೆದರಿಕೆ ಹಾಕಿದ್ದಾರೆ. ನಾಮಪತ್ರ ಹಿಂಪಡೆಯದಿದ್ದರೂ ಮೂವರು ಆರೋಪಿಗಳು ಸೇರಿಕೊಂಡು, ನನ್ನ ಸೂಚಕ ಹಾಗೂ ಸಹೋದರ ಡಾ.ಸಂತೋಷ ಬಗಲಿ ಇವರ ಸಹಿಯನ್ನು ತಾವೇ ಮಾಡಿ, ನಾಮಪತ್ರವನ್ನು ಹಿಂಪಡೆದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಸಂಕೇತ ಬಗಲಿ ದೂರಿನಲ್ಲಿ ತಿಳಿಸಿದ್ದಾರೆ.