’ಬುಧವಾರ ಬೆಳಿಗ್ಗೆ ಜಮೀನಿನ ಕಡೆ ಹೋಗಿ ಹಣ್ಣಾಗಿದ್ದ ಒಂದು ಗೊನೆಯನ್ನು ಕಟಾವು ಮಾಡಿಕೊಂಡು ಬಂದು ಕೆಲಸದ ಮೇಲೆ ಗ್ರಾಮ ಪಂಚಾಯಿತಿಗೆ ಹೋಗಿದ್ದಾಗ ಬಾಳೆತೋಟಕ್ಕೆ ಬೆಂಕಿ ಬಿದ್ದಿರುವ ವಿಷಯವನ್ನು ಅಕ್ಕಪಕ್ಕದ ಜಮೀನಿನವರು ಕಂಡು ತಿಳಿಸಿದರು. ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ತೋಟವು ಸಂಪೂರ್ಣವಾಗಿ ನಾಶವಾಗಿದ್ದು, ಬೆಂಕಿ ಪಕ್ಕದಲ್ಲಿದ್ದ ಕಾಡಿಗೂ ಹರಡಿಕೊಂಡಿದೆ. ತೋಟಕ್ಕೆ ಬೆಂಕಿ ಯಾವ ರೀತಿ ಬಿದ್ದಿದೆ ಎಂದು ಗೊತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.