ಮಾಡಬಾಳ್(ಮಾಗಡಿ): ಕೊಟ್ಟಗಾರಹಳ್ಳಿಯಲ್ಲಿ ಮಂಗಳವಾರ ರಾತ್ರಿ ತೆನೆ ಇದ್ದ ರಾಗಿಮೆದೆಗೆದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ದಲಿತ ಪೂಜಾರಿ ನಂಜುಂಡಯ್ಯ ಅವರು ಹೊಲದಲ್ಲಿ ಬಣವೆ ಮಾಡಿದ್ದ ತೆನೆಸಹಿತ ರಾಗಿಮೆದೆಗೆ ಬೆಂಕಿ ಹಚ್ಚಿದ್ದರಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಂದಾಜು ₹30 ಸಾವಿರ ಬೆಲೆಬಾಳುವ ರಾಗಿಬಣವೆ ಸುಟ್ಟು ಭಸ್ಮವಾಗಿದೆ. ಸಾಕಿರುವ ಹಸು ಮತ್ತು ಕರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತ ಸಂಕಟ ತೋಡಿಕೊಂಡಿದ್ದಾರೆ.
‘ರೈತನಿಗೆ ನಷ್ಟವಾಗಿದೆ. ಈ ನಷ್ಟ ತುಂಬಿಸಿಕೊಡಬೇಕು’ ಎಂದು ಮುಖಂಡ ಉಮೇಶ್ ತಿಳಿಸಿದ್ದಾರೆ.