ಉಪ ವಿಭಾಗಾಧಿಕಾರಿ ಟಿ.ವಿಪ್ರಕಾಶ್ ಮಾತನಾಡಿ, ಬಹುಪಾಲುಸಮಯ ಸೈನ್ಯದಲ್ಲಿ ಕಳೆದು ನಿವೃತ್ತರಾದಯೋಧರು ಸಮಾಜದ ಮುಖ್ಯವಾಹಿನಿಯಲ್ಲಿ ಬಾಳಲು ಹಲವು ತೊಡಕುಗಳಿವೆ. ಸರ್ಕಾರ ಸೈನಿಕ ಕಲ್ಯಾಣದ ಬಗ್ಗೆ ಎಷ್ಟೇ ಭರವಸೆ ನೀಡಿದರೂ, ನಿವೃತ್ತರಾದಸೈನಿಕನಿಗೆ ಒಂದು ನಿವೇಶನ ಪಡೆಯಲುಸಾಧ್ಯವಾಗುತ್ತಿಲ್ಲ. ಸರ್ಕಾರದ ವಸತಿ ಯೋಜನೆಗಳಲ್ಲಿ ನಿವೇಶನ ಕಾಯ್ದಿರಿಸಬೇಕು.ಆದಾಯ ಮಿತಿಯ ನಿಯಮ ಸಡಿಲಗೊಳಿಸುವ ಕಾನೂನು ಜಾರಿಗೊಳಿಸಬೇಕು. ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಕೋರಿದರು.