ವಿವಿಧ ಸಂಘಟನೆಗಳು, ಪತ್ರಕರ್ತರ ಸಹಕಾರದಿಂದ ಜಿಲ್ಲಾಡಳಿತ ಅವರಿಗೆ ಮನೆ ಮಂಜೂರು ಮಾಡಿತ್ತು. ಶುಕ್ರವಾರ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಗೃಹ ಪ್ರವೇಶವೂ ನಡೆದಿತ್ತು. ಪುತ್ರ ಶ್ರೀನಿವಾಸ್ ಜತೆ ಅಲ್ಲಿ ತಂಗಿದ್ದರು.
ಗೃಹಪ್ರವೇಶ ನಡೆದ ರಾತ್ರಿಯೇ ಅಲ್ಲಿಗೆ ಬಂದ ಮಲವಗೊಪ್ಪದ ಗಿರಿಜಮ್ಮ ಇದು ನಮಗೆ ಹಂಚಿಕೆಯಾದ ಮನೆ ಎಂದು ಪತಿ ಹರೀಶ್ ಹಾಗೂ ಮಗಳು ಚೈತ್ರಾ ಜತೆ ಬಂದು ಠಿಕಾಣಿ ಹೂಡಿದ್ದಾರೆ.