ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ತಲುಪದ ಪರಿಹಾರ: ಕಾಂಗ್ರೆಸ್ ಆರೋಪ

Last Updated 21 ನವೆಂಬರ್ 2019, 12:26 IST
ಅಕ್ಷರ ಗಾತ್ರ

ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಸರ್ಕಾರ ಘೋಷಿಸಿದ ಪರಿಹಾರ ಇದುವರೆಗೂ ತಲುಪಿಲ್ಲ. ಅಧಿಕಾರಿಗಳು ಕೆಲವರಿಗೆ ಪುಡಿಗಾಸು ನೀಡಿ ಸುಮ್ಮನಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಟೀಕಿಸಿದರು.

ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಸಂತ್ರಸ್ತರಾದ ಅಂಗಳಯ್ಯನ ಕೆರೆ, ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾಗಳ ಹಲವುಕುಟುಂಬಗಳನ್ನು ಗುರುವಾರ ಭೇಟಿಯಾದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಸಂತ್ರಸ್ತ ಕುಟುಂಬಗಳಿಗೆ1 ಲಕ್ಷ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ₨ 5 ಲಕ್ಷ ಕೊಡುವುದಾಗಿಸರ್ಕಾರ ಭರವಸೆ ನೀಡಿತ್ತು. ಎರಡು ತಿಂಗಳು ಕಳೆದರೂ ಯಾವುದೇ ಪರಹಾರ ನೀಡಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ನೀಡಲಾಗಿದೆ ಎಂದುಹೇಳುತ್ತಲೇಇದ್ದಾರೆ. ಪರಿಹಾರ ಮಾತ್ರಯಾರಿಗೂಬಂದಿಲ್ಲ. ಕೆಲವರಿಗೆ ₨ 10 ಸಾವಿರನೀಡಲಾಗಿದೆ ಎಂದು ದೂರಿದರು.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲೇ ಸಾವಿರಾರುಜನರು ಮನೆಮಠ ಕಳೆದುಕೊಂಡಿದ್ದಾರೆ. ನೂರಾರುಮನೆಗಳು ಬಿದ್ದುಹೋಗಿವೆ.ಇಂತಹ ಸಂತ್ರಸ್ತರ ನೆರವಿಗೆ ಬಾರದೆ ಬಿಜೆಪಿ ಸರ್ಕಾರ ಆಪರೇಷನ್ ಕಮಲ, ಉಪ ಚುನಾವಣೆಎನ್ನುತ್ತಾಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆಎಂದು ಆರೋಪಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕರಮೇಶ್ ಹೆಗ್ಡೆ, ಸದಸ್ಯೆಯಮುನಾ ರಂಗನಾಥ್, ಮಾಜಿ ಸದಸ್ಯಪಂಡಿತ್ ವಿ.ವಿಶ್ವನಾಥ್,ಮುಖಂಡರಾದಚಂದ್ರಭೂಪಾಲ್, ನಾಗರಾಜ್, ರಾಮೇಗೌಡ, ಅಫ್ರಿದಿ, ನಾಜಿಮಾ, ಎಸ್.ಪಿ.ಶೇಷಾದ್ರಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT