ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನು ಓಡಿಸುವಂತೆ ಮನವಿ ಮಾಡಿದ್ದರು. ವಲಯ ಅರಣ್ಯಾಧಿಕಾರಿ ದಿನೇಶ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ಅರುಣ್, ಅರಣ್ಯ ರಕ್ಷಕರಾದ ನರಸಿಂಹ, ರಾಜು ತಂಡ ರೈತರ ನೆರವಿನೊಂದಿಗೆ ಪಟಾಕಿ ಸಿಡಿಸಿ ಮುನೇಶ್ವರಬೆಟ್ಟದ ಮಧ್ಯಭಾಗಕ್ಕೆ ಆನೆಗಳನ್ನು ಓಡಿಸಿದ್ದಾರೆ.
ಅರ್ಜಿ: ಆನೆ ದಾಳಿಯಿಂದ ನೂರಾರು ಎಕರೆ ಪ್ರದೇಶದ ಬೆಳೆ ನಾಶವಾಗಿದ್ದು ರೈತರು ಪರಿಹಾರಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಪರಿಹಾರ ಕ್ರಮ: ರೈತರಿಂದ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಿ, ನಷ್ಟದ ಅಂದಾಜಿನ ವರದಿ ತಯಾರಿಸಿ ಸೂಕ್ತ ಪರಿಹಾರ ಶೀಘ್ರವಾಗಿ ನೀಡುವ ಭರವಸೆಯನ್ನು ಅರಣ್ಯ ಅಧಿಕಾರಿಗಳು ನೀಡಿದ್ದಾರೆ.
ಒತ್ತಾಯ: ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಬಿತ್ತನೆ ಮಾಡಿದ ದಿನದಿಂದ ಕಟಾವು ಮಾಡಿ ಮನೆಗೆ ತರುವ ತನಕ ರಾತ್ರಿ ವೇಳೆಯಲ್ಲಿ ನಿರಂತರವಾಗಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದೇವೆ. ಆದರೂ, ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶಗೊಳಿಸಿವೆ. ಕಾಡಾನೆಗಳು ಕಾಡಿನಿಂದ ಶಾಶ್ವತವಾಗಿ ಹೊರಬರದಂತೆ ಕ್ರಮ ಕೈಗೊಳ್ಳಬೇಕೆಂಬುದು ನೊಂದ ರೈತರ ಒತ್ತಾಯವಾಗಿದೆ.