ಸಾಗರ: ಜನತಾ ಕರ್ಫ್ಯೂ ಅಂಗವಾಗಿ ಭಾನುವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ನಿವಾಸದ ಎದುರು ಚಪ್ಪಾಳೆ ತಟ್ಟುವ ಮೂಲಕ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಸಂಜೆ 5.30ರ ವೇಳೆಗೆ ಅವರು ಜೋಸೆಫ್ ನಗರ ಬಡಾವಣೆಯಲ್ಲಿರುವ ತಮ್ಮ ನಿವಾಸದ ಹೊರಕ್ಕೆ ಬಂದರು. ಆಟಿಕೆ ಸಾಮಾಗ್ರಿಯಾದ ಡೋಲು ಬಡಿಯುತ್ತಿದ್ದ ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಸೇರಿಕೊಂಡ ಕಾಗೋಡು ಚಪ್ಪಾಳೆ ತಟ್ಟಿದರು.