ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ಗಂಟೆವರೆಗೆ ನಡೆಯುವ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಎನ್. ರಮೇಶ್, ಡಾ.ಸಾತ್ವಿಕ್, ಡಾ.ನಡಹಳ್ಳಿ ರವಿ, ಡಾ.ಡಿ.ಜೆ. ತಾನಾಜಿ ಭಾಗವಹಿಸುವರು. ಬೆಳಿಗ್ಗೆ 9ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶರಣ್ಯ ಸಂಸ್ಥೆ ಗೌರವಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸಲಿದ್ದಾರೆ. ವಿಕಾಸ ಟ್ರಸ್ಟ್ಟ್ರಸ್ಟಿ ಪಾಂಡುರಂಗ ಪರಾಂಡೆ, ಆರೋಗ್ಯ ಭಾರತಿ ವಿಭಾಗೀಯ ಸಂಯೋಜಕ ಎನ್. ಶ್ರೀಧರ್ ಭಾಗವಹಿಸುವರು. ಆರೋಗ್ಯ ಭಾರತಿ ಅಧ್ಯಕ್ಷ ಡಾ. ಎ.ಎಂ. ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.