ಶಸ್ತ್ರಚಿಕಿತ್ಸಾ ತಜ್ಞ ಡಾ.ಟಿ.ಎಚ್. ಅಂಜನಪ್ಪ ಅವರು ಮಾತನಾಡಿ, ‘ಯುವಜನತೆ ತಪ್ಪು, ಒಪ್ಪುಗಳ ವಿವೇಚನೆ ಮಾಡಿ ಬದುಕು ನಡೆಸಬೇಕು. ಮೌಢ್ಯಗಳ ವಿಚಾರದಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವ ಸಂದರ್ಭಗಳಿವೆ. ಆದ್ದರಿಂದ, ಜೀವನದಲ್ಲಿ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು. ಶರೀರದ ಅಂಗಗಳ ಪ್ರಾಮುಖ್ಯವನ್ನೂ ಅರಿಯಬೇಕು. ಬದುಕಿನ ಬಗ್ಗೆ
ಸ್ಪಷ್ಟತೆ ಇರಿಸಿಕೊಂಡು ಅರಿವಿನ ಹಾದಿಯಲ್ಲಿ ನಡೆಯಬೇಕು’ ಎಂದರು.