ಅಂದಾಜು 234 ಎಕರೆ ವಿಶಾಲವಾಗಿರುವ ಇದು, ನೀರಾವರಿ ಕೆರೆಯೂ ಆಗಿತ್ತು. ಕೊಳವೆಬಾವಿಗಳ ಹಾವಳಿ ಬರುವ ಮೊದಲು ಕೆರೆಯ ನೀರಿನಿಂದ ಶೆಟ್ಟಿಕೇರಿ, ಕುಂದ್ರಳ್ಳಿ, ಚನ್ನಪಟ್ಟಣ ಗ್ರಾಮಗಳ ರೈತರು ನೀರಾವರಿ ಮಾಡುತ್ತಿದ್ದರು. ಈಗ ಲೂ ಕೆರೆ ನೀರು ಹರಿಸಲು ಸಣ್ಣ ಸಣ್ಣ ಕಾಲುವೆಗಳು ಇರುವುದನ್ನು ಕಾಣ ಬಹುದು. ಒಂದು ದಶಕದಿಂದ ವರುಣನ ಅವಕೃಪೆಯಿಂದಾಗಿ ಕೆರೆ ತುಂಬಿರಲಿಲ್ಲ. ಆದರೆ ಕಳೆದ ವರ್ಷದಿಂದ ಉತ್ತಮ ಮಳೆ ಆಗುತ್ತಿದ್ದು, ಕೆರೆ ತುಂಬಿಕೊಂಡಿದೆ.