ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿಂದ ಬಿಳಿ ಜೋಳ ಬಿತ್ತನೆ ಪ್ರದೇಶ ಕಡಿಮೆಯಾಗಿದೆ.ಮಲಪ್ರಭಾ ಬಲದಂಡೆ ಕಾಲುವೆ ನೀರಿನಿಂದ ಕೆಲವೆಡೆ ಬಿಳಿ ಜೋಳ ಬೆಳೆಯಲಾಗಿದೆ.ಲಾಭ ಇಲ್ಲದಿದ್ದರೂ, ಕನಿಷ್ಠ ಹೊಟ್ಟೆಗೆ ಗಂಜಿಯಾದರೂ ದೊರಕೀತು ಎಂಬ ಆಲೋಚನೆಯಲ್ಲಿ ರೈತರಿದ್ದರು. ಆದರೆ, ಲದ್ದಿ ಹುಳದ ಬಾಧೆ ಆರಂಭವಾಗಿರುವುದು ಅನ್ನದಾತರ ನಿದ್ರೆಗೆಡಿಸಿದೆ.