ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ಕೊಡುವ ಬದಲು ಬೇರೆ ವ್ಯವಸ್ಥೆ ಕಲ್ಪಿಸಿ: ಡಾ. ಬಿ.ಟಿ. ಲಲಿತಾ ನಾಯಕ್‌

Last Updated 7 ನವೆಂಬರ್ 2022, 5:15 IST
ಅಕ್ಷರ ಗಾತ್ರ

ಗದಗ: ‘ಈಗ ಇರುವ ದೇವರುಗಳೆಲ್ಲರೂ ಮನುಷ್ಯರೇ. ಆದರೆ, ನಾವು ಅವರನ್ನೇ ದೇವರು ಅಂತ ಮಾಡಿಕೊಂಡಿದ್ದೇವೆ. ದೈವ ನರ್ತಕರಿಗೆ ಸರ್ಕಾರ ₹2 ಸಾವಿರ ಮಾಸಾಶನ ಕೊಡುವ ಬದಲು; ಅವರು ದುಡಿದು ತಿನ್ನುವಂತೆ ಮಾಡಬೇಕು’ ಎಂದು ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಡಾ. ಬಿ.ಟಿ.ಲಲಿತಾ ನಾಯಕ್‌ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೈವ ನರ್ತಕರು ದೇವರು ಅಂತ ಹೇಳಿ ₹2 ಸಾವಿರ ಕೊಡುವ ಬದಲು ಅವರು ಘನತೆಯಿಂದ ₹10ರಿಂದ ₹15 ಸಾವಿರ ದುಡಿಯುವಂತೆ ವ್ಯವಸ್ಥೆ ಮಾಡಬೇಕು. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ಅದು ಬಿಟ್ಟು, ದೇವರ ಹೆಸರು ಹೇಳಿ ಕುಣಿಯುವವರಿಗೆ ಸಾರ್ವಜನಿಕರ ತೆರಿಗೆ ಹಣ ಕೊಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಮಂಗಳಮುಖಿಯರು ಗಟ್ಟಿ ಮುಟ್ಟಾಗಿರುತ್ತಾರೆ. ಆದರೆ, ಕೆಲವರು ಅವರಿಗೆ ₹100 ಕೊಟ್ಟು, ₹1 ಅವರಿಂದ ಪಡೆದುಕೊಂಡು ಕಣ್ಣಿಗೆ ಒತ್ತಿಕೊಂಡು, ಜೇಬಿಗೆ ಇಟ್ಟುಕೊಳ್ಳುತ್ತಾರೆ. ಅವರು ದೇವರಿದ್ದಂತೆ, ಆಶೀರ್ವಾದ ಮಾಡುತ್ತಾರೆ ಎಂಬ ಮೂಢನಂಬಿಕೆ ಬಿತ್ತುತ್ತಿದ್ದಾರೆ. ಕೆಲವು ಗಂಡಸರು ಈಗ ಮಂಗಳಮುಖಿಯರ ವೇಷ ಧರಿಸಿ ದುಡ್ಡು ಕೀಳುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT