<p><strong>ಗದಗ</strong>: ‘ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ದೈಹಿಕ ಸದೃಢತೆಗೆ ಸಮತೋಲಿತ ಆಹಾರ ಸೇವನೆ ಮುಖ್ಯ’ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಎಸ್.ಸಿ. ನಾಗರಬೆಟ್ಟ ಹೇಳಿದರು.</p>.<p>ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಗುರುವಾರ ನಡೆದ ‘ಕ್ರೀಡಾ ಸಾಧನೆಗಾಗಿ ಆಹಾರ ಪದ್ಧತಿ ಪೋಷಣೆ ಮತ್ತು ಪೂರಕಗಳು’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಬೂದೇಶ್ ಕನಾಜ ಮಾತನಾಡಿ, ‘ಆಹಾರ, ನೀರು ಮತ್ತು ವಿಶ್ರಾಂತಿ ಸರಿಯಾದ ಕ್ರಮದಲ್ಲಿದ್ದರೆ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ಸಾಧನೆ ಉತ್ತಮವಾಗಿರುತ್ತದೆ’ ಎಂದು ಹೇಳಿದರು.</p>.<p>‘ಕ್ರೀಡಾಪಟುಗಳು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಾರ್ಬೊಹೈಡ್ರೇಟ್ಸ್ ಶಕ್ತಿಯ ಮುಖ್ಯ ಮೂಲವಾಗಿದ್ದು ಅನ್ನ, ರಾಗಿ, ಗೋಧಿ, ಆಲೂಗಡ್ಡೆ ಮತ್ತು ಬಾಳೆಹಣ್ಣು ಪ್ರೋಟೀನ್ ಸ್ನಾಯು ಬೆಳವಣಿಗೆ ಮತ್ತು ಮರುಪೂರಣಕ್ಕೆ ಮೊಟ್ಟೆ, ಹಾಲು, ಮೊಸರು, ದಾಲ್, ಕಡಲೆ ಮತ್ತು ಸೋಯಾ ದೀರ್ಘಕಾಲದ ಶಕ್ತಿಗೆ ಕಡಲೆಕಾಯಿ, ಬಾದಾಮಿ, ಬೀಜಗಳು ಉತ್ತಮ ಆಹಾರಗಳಾಗಿವೆ’ ಎಂದರು.</p>.<p>ಸಂಸ್ಥೆಯ ಕಾರ್ಯದರ್ಶಿ ಎ.ಡಿ.ಗೋಡಕಿಂಡಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಯುವಕರ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಹೊರಗಿನ ಆಹಾರಕ್ಕೆ ಬಹಳಷ್ಟು ಆಕರ್ಷಣೆಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ಎಷ್ಟು ಸಾಧ್ಯವೋ ಅಷ್ಟು ಮನೆಯ ಆಹಾರವನ್ನೇ ಸೇವಿಸಿದರೆ ಯಾವುದೇ ರೋಗವಿಲ್ಲದೆ ಸದೃಢವಾಗಿ ಬದುಕಬಹುದು’ ಎಂದರು. </p>.<p>ಅಧ್ಯಕ್ಷತೆ ವಹಿಸಿದ್ದ ಡಾ. ವಿ.ಟಿ.ನಾಯಕ ಮಾತನಾಡಿ, ‘ಯುವಜನತೆ ಹೊರಗಿನ ಆಹಾರ ಪದ್ಧತಿಗೆ ಆಕರ್ಷಣೆಯಾಗಬಾರದು’ ಎಂದರು.</p>.<p>ಎಸ್ಡಬ್ಲ್ಯು ಮುಖ್ಯಸ್ಥರಾದ ಸವಿತಾ ಭಂಡಾರ್ಕರ, ಪದವಿ ಮಹಾವಿದ್ಯಾಲಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಸುನೀತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.</p>.<div><blockquote>ಕ್ರೀಡಾ ಸಾಧನೆಗೆ ಸರಿಯಾದ ಆಹಾರ ಪದ್ಧತಿ ಮತ್ತು ಪೋಷಣೆ ಬಹಳ ಮುಖ್ಯ. ಸರಿಯಾದ ಆಹಾರದಿಂದ ದೇಹದ ಶಕ್ತಿ ಸಹನಶಕ್ತಿ ಮತ್ತು ವೇಗ ಹೆಚ್ಚುತ್ತದೆ.</blockquote><span class="attribution">– ಡಾ. ಬೂದೇಶ್ ಕನಾಜ, ಪ್ರಾಧ್ಯಾಪಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ದೈಹಿಕ ಸದೃಢತೆಗೆ ಸಮತೋಲಿತ ಆಹಾರ ಸೇವನೆ ಮುಖ್ಯ’ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಎಸ್.ಸಿ. ನಾಗರಬೆಟ್ಟ ಹೇಳಿದರು.</p>.<p>ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಗುರುವಾರ ನಡೆದ ‘ಕ್ರೀಡಾ ಸಾಧನೆಗಾಗಿ ಆಹಾರ ಪದ್ಧತಿ ಪೋಷಣೆ ಮತ್ತು ಪೂರಕಗಳು’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಬೂದೇಶ್ ಕನಾಜ ಮಾತನಾಡಿ, ‘ಆಹಾರ, ನೀರು ಮತ್ತು ವಿಶ್ರಾಂತಿ ಸರಿಯಾದ ಕ್ರಮದಲ್ಲಿದ್ದರೆ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ಸಾಧನೆ ಉತ್ತಮವಾಗಿರುತ್ತದೆ’ ಎಂದು ಹೇಳಿದರು.</p>.<p>‘ಕ್ರೀಡಾಪಟುಗಳು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಾರ್ಬೊಹೈಡ್ರೇಟ್ಸ್ ಶಕ್ತಿಯ ಮುಖ್ಯ ಮೂಲವಾಗಿದ್ದು ಅನ್ನ, ರಾಗಿ, ಗೋಧಿ, ಆಲೂಗಡ್ಡೆ ಮತ್ತು ಬಾಳೆಹಣ್ಣು ಪ್ರೋಟೀನ್ ಸ್ನಾಯು ಬೆಳವಣಿಗೆ ಮತ್ತು ಮರುಪೂರಣಕ್ಕೆ ಮೊಟ್ಟೆ, ಹಾಲು, ಮೊಸರು, ದಾಲ್, ಕಡಲೆ ಮತ್ತು ಸೋಯಾ ದೀರ್ಘಕಾಲದ ಶಕ್ತಿಗೆ ಕಡಲೆಕಾಯಿ, ಬಾದಾಮಿ, ಬೀಜಗಳು ಉತ್ತಮ ಆಹಾರಗಳಾಗಿವೆ’ ಎಂದರು.</p>.<p>ಸಂಸ್ಥೆಯ ಕಾರ್ಯದರ್ಶಿ ಎ.ಡಿ.ಗೋಡಕಿಂಡಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಯುವಕರ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಹೊರಗಿನ ಆಹಾರಕ್ಕೆ ಬಹಳಷ್ಟು ಆಕರ್ಷಣೆಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ಎಷ್ಟು ಸಾಧ್ಯವೋ ಅಷ್ಟು ಮನೆಯ ಆಹಾರವನ್ನೇ ಸೇವಿಸಿದರೆ ಯಾವುದೇ ರೋಗವಿಲ್ಲದೆ ಸದೃಢವಾಗಿ ಬದುಕಬಹುದು’ ಎಂದರು. </p>.<p>ಅಧ್ಯಕ್ಷತೆ ವಹಿಸಿದ್ದ ಡಾ. ವಿ.ಟಿ.ನಾಯಕ ಮಾತನಾಡಿ, ‘ಯುವಜನತೆ ಹೊರಗಿನ ಆಹಾರ ಪದ್ಧತಿಗೆ ಆಕರ್ಷಣೆಯಾಗಬಾರದು’ ಎಂದರು.</p>.<p>ಎಸ್ಡಬ್ಲ್ಯು ಮುಖ್ಯಸ್ಥರಾದ ಸವಿತಾ ಭಂಡಾರ್ಕರ, ಪದವಿ ಮಹಾವಿದ್ಯಾಲಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಸುನೀತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.</p>.<div><blockquote>ಕ್ರೀಡಾ ಸಾಧನೆಗೆ ಸರಿಯಾದ ಆಹಾರ ಪದ್ಧತಿ ಮತ್ತು ಪೋಷಣೆ ಬಹಳ ಮುಖ್ಯ. ಸರಿಯಾದ ಆಹಾರದಿಂದ ದೇಹದ ಶಕ್ತಿ ಸಹನಶಕ್ತಿ ಮತ್ತು ವೇಗ ಹೆಚ್ಚುತ್ತದೆ.</blockquote><span class="attribution">– ಡಾ. ಬೂದೇಶ್ ಕನಾಜ, ಪ್ರಾಧ್ಯಾಪಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>