ಬಸವ ತತ್ವದ ಅನುಯಾಯಿ ಅಶೋಕ ಬರಗುಂಡಿ ಮಾತನಾಡಿ, ‘ಆಮಿಷಕ್ಕೆ ಒಳಗಾಗದಂತೆ ಸರ್ಕಾರ, ಧಾರ್ಮಿಕ ಮುಖಂಡರು, ಸ್ವಾಮೀಜಿಗಳು ಅವರನ್ನು ಬಲಿಷ್ಠಗೊಳಿಸಲಿ. ಒಂದೆಡೆ ಅನ್ನ, ಉದ್ಯೋಗ ಸಿಗದಂತೆ ಮಾಡಿ, ಮತ್ತೊಂದೆಡೆ ಮತಾಂತರಕ್ಕೆ ವಿರೋಧಿಸುತ್ತಾರೆ. ಈ ಕಾಯ್ದೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಟೀಕಿಸಿದರು.