ಚೆನ್ನಪಟ್ಟಣ, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡಾದಿಂದ ಗೊಜನೂರುವರೆಗೆ ಬಸ್ ಸೌಲಭ್ಯ ಇದೆ. ಆದರೆ, ಶನಿವಾರ ಮಕ್ಕಳ ಶಾಲಾ ಸಮಯಕ್ಕೆ ಬಸ್ ಇಲ್ಲ. ಹೀಗಾಗಿ ನಡಿಗೆ ಅನಿವಾರ್ಯ. ಕೆಲವರು ಸೈಕಲ್ ಹಾಗೂ ಪಾಲಕರ ಬೈಕ್ಗಳಲ್ಲಿ ಶಾಲೆ ತಲುಪಿದರೆ, ಇನ್ನುಳಿದವರಿಗೆ ಕಾಲ್ನಡಿಗೆ ಅನಿವಾರ್ಯ. ಮಧ್ಯಾಹ್ನ ಶಾಲೆ ಬಿಟ್ಟ ನಂತರವೂ ಬಸ್ ಇಲ್ಲ. ಬಿಸಿಲಿನಲ್ಲಿ 3 ಗಂಟೆಯವರೆಗೆ ಕಾಯಬೇಕು. ಇಲ್ಲದಿದ್ದರೆ ಮತ್ತೆ ಮನೆಯತ್ತ ಹೆಜ್ಜೆ ಹಾಕಬೇಕು.