ತಾಲ್ಲೂಕಿನಲ್ಲಿ ಬೆಳೆಯುವ ಗೋವಿನಜೋಳ ಹೆಚ್ಚಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಖರೀದಿದಾರರೂ ಮುಂದೆ ಬರಲಿಲ್ಲ. ಹೀಗಾಗಿ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿಯಿತು. ಇದರಿಂದಾಗಿ ಕಂಗೆಟ್ಟ ರೈತರು ಉತ್ತಮ ದರ ಬಂದಾಗ ಮಾರಾಟ ಮಾಡಲು ನಿರ್ಧರಿಸಿ ಕಟಾವು ಮಾಡಿದ ಬೆಳೆಯನ್ನು ಹೊಲದಲ್ಲಿಯೇ ರಾಶಿ ಹಾಕಿ ತಾಡಪತ್ರಿಯಿಂದ ಮುಚ್ಚಿಟ್ಟರು.