ಜನರು ದಿನಸಿ, ಮೀನು, ಮಾಂಸ, ಹಣ್ಣು ತರಕಾರಿ ಖರೀದಿಸಲು ಮಾರುಕಟ್ಟೆಗೆ ಮುಗಿಬಿದ್ದಿದ್ದರಿಂದ ದಟ್ಟಣೆ ಉಂಟಾಗಿತ್ತು. ಹೆಚ್ಚಿನವರು ಮಾಸ್ಕ್ ಧರಿಸಿರಲಿಲ್ಲ. ಅಂತರ ಪಾಲಿಸುವುದನ್ನು ಮರೆತು ಜನರು ಖರೀದಿಯಲ್ಲಿ ಮುಳುಗಿದ್ದರು. ಲಾಕ್ಡೌನ್ ಆರಂಭದ ದಿನಗಳಲ್ಲಿ ಅಂಗಡಿಗಳ ಮುಂದೆ ಅಂತರ ಪಾಲಿಸಲು ಚೌಕಾಕಾರದಲ್ಲಿ ಗುರುತು ಮಾಡಲಾಗಿತ್ತು. ಆದರೆ, ಈಗ ಆ ಗುರುತೂ ಮಾಯವಾಗಿದೆ.