ಜನರ ನಿರ್ಲಕ್ಷ್ಯ: ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಜಿಲ್ಲಾ ಕೇಂದ್ರದಲ್ಲೇ ಸಾರ್ವಜನಿಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ರಸ್ತೆಗಿಳಿಯುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಅದರಲ್ಲೂ 16 ಪ್ರಕರಣಗಳು ವರದಿಯಾಗಿರುವ ಗದುಗಿನ ಕಂಟೈನ್ಮೆಂಟ್ ಪ್ರದೇಶ, ಗಂಜಿಬಸವೇಶ್ವರ ಓಣಿಯಲ್ಲೇ ಜನರ ಓಡಾಟ ಹೆಚ್ಚಿದ್ದು, ಸಮುದಾಯದ ಮಟ್ಟಕ್ಕೆ ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸಿದೆ.