ಅಧಿಕಾರಿಗಳಿಗೆ ವ್ಯಾಪಾರಕ್ಕೆ ಅನಕೂಲ ಮಾಡಿಕೊಡಿ ಎಂದು ಕೇಳಿದರೆ, ನಾವು ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತೇವೆ. ಒತ್ತುವ ಬಂಡಿ ಮೂಲಕ ವ್ಯಾಪಾರ ಮಾಡಿ ಎಂದು ಸಲಹೆ ನೀಡುತ್ತಾರೆ. ಆದರೆ ಬೇಕರಿ ತಿನಿಸುಗಳನ್ನು ಒತ್ತುವ ಗಾಡಿಯಲ್ಲಿ ಬಿಸಿಲಿಗೆ ತೆಗೆದುಕೊಂಡು ಹೋದರೆ ಸಂಪೂರ್ಣವಾಗಿ ಕರಗಿ ಹೋಗುತ್ತವೆ, ಕೆಲವೊಂದು ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ ಆದಕಾರಣ ಅಂಗಡಿಯಲ್ಲಿಯೇ ಇದ್ದುಕೊಂಡು ವ್ಯಾಪರ ಮಾಡಲು ನಮಗೆ ಅನಕೂಲ ಮಾಡಿಕೊಡಲು ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.