ಸ್ವಯಂ ದಿಗ್ಬಂಧನ: ಭಾನುವಾರ ಬೆಳಿಗ್ಗೆ ನಸುಕಿನಲ್ಲಿ ವಾಯುವಿಹಾರ ಮತ್ತು ಹಾಲು ಖರೀದಿಗಾಗಿ ಒಂದಿಷ್ಟು ಜನರು ಹೊರಗೆ ಕಾಣಿಸಿಕೊಂಡಿದ್ದರು. ಆದರೆ, 7 ಗಂಟೆಯ ನಂತರ, ಜನರ ಸುಳಿವು ಇರಲಿಲ್ಲ. ಪೌರಕಾರ್ಮಿಕರು ಬೆಳಗಿನ 8 ಗಂಟೆಯವರೆಗೆ ಸ್ವಚ್ಚತಾ ಕಾರ್ಯ ಕೈಗೊಂಡರು.
ಬೆಳಿಗ್ಗೆ 7 ಗಂಟೆಯಿಂದಲೇ ಜನಸಂಚಾರ ಸಂಪೂರ್ಣ ನಿಂತು ಹೋಗಿತ್ತು. ನಗರದ ಯಾವುದೇ ಮುಖ್ಯರಸ್ತೆ, ಅದಕ್ಕೆ ಅಂಟಿಕೊಂಡ ಸಣ್ಣ ರಸ್ತೆ ಮತ್ತು ಓಣಿಗಳ ಒಳಗಿನ ಕಿರು ರಸ್ತೆಗಳಲ್ಲೂ ಕೂಡ ಜನ ಸಂಚಾರ ಸಂಪೂರ್ಣ ನಿಂತು ಹೋಗಿತ್ತು. ಆಸ್ಪತ್ರೆ, ಹಾಲು, ಔಷಧ ಅಂಗಡಿ, ಪತ್ರಿಕೆ ಪೂರೈಕೆ ಎಂದಿನಂತೆ ಇತ್ತು. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಬಸ್ ಸಂಚಾರ ಪ್ರಾರಂಭಿಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಾ.ಕ.ರ.ಸಾ.ಸ ಗದಗ ವಿಭಾಗೀಯ ಕಚೇರಿ ಹೇಳಿತ್ತು. ಆದರೆ, ಬಸ್ಗಳು ಸಂಜೆಯವರೆಗೆ ರಸ್ತೆಗಿಳಿಯಲಿಲ್ಲ.